ನೆನಪು

ಹೊಳೆದಂಡೆಯ ಮುಟ್ಟಲು ಮರುಕಿ
ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ
ರಕ್ತ ಬಂತು ನಿನ್ನ ನೆನಪಾಗಿ
ಹಿತ್ತಲದ ನಂದಿ ಬಟ್ಟಲು ಹೂಗಳು
ಗಂಧ ಯಾಕೋ ಪರಿಮಳ ಸೂಸಲು
ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು.

ಯಾರು ಎಲ್ಲಿ ಯಾವ ಭಾವಕೆ
ಬಸಿರಾದರೂ, ನದಿ ಸುಮ್ಮನೆ
ಹರಿಯುತ್ತದೆ ಸಾಗರದ ಸೆಳುವಿಗೆ
ಮುಂಜಾನೆ ಅರಳಿದ ಹೂ ಸಂಜೆ ಬಾಡಿ
ಮಬ್ಬು ಕತ್ತಲೆ ಕೋಣೆಯಲ್ಲಿ ನಿನ್ನ ಕರಿ
ನೆರಳು ದಾಟಿ ಬರುವುದಿಲ್ಲ ಅಂಗಳದಿಂದ
ಕೋಣೆಯವರೆಗೆ ಹೊರಗೆ ಸ್ವಲ್ಪ
ತಿಳಿ ಬೆಳದಿಂಗಳು ಮಾತ್ರ ಹರಡಿದೆ ಮುಸುಕಾಗಿ.

ಎಲ್ಲೆಲ್ಲೋ ಹಾರಾಡಿದ ಚಿಟ್ಟೆ ಹೀರಿದ
ಮಕರಂದ ಜೇನು ಗೂಡಾಗಿ ನನ್ನೆದೆ
ಸಿಹಿ ಹನಿಯ ತುಂಬಿದೆ ಬರೀ ಬೆವರ
ಹನಿಗಳು ಸಾರುತ್ತಿವೆ; ತಂಗಾಳಿ ಬೀಸದ
ಉರಿ ಹಗಲಿನಲಿ ಎಲ್ಲೆಲ್ಲೋ ಆಸ್ಪತ್ರೆಯ
ವಾಸನೆ ನೀನು ಮುಖ ತೋರಿಸದೆ
ಜಡಿ ಹೋದ ಸೂರ್ಯ ತಾಪದಿಂದ
ಕುದಿದ ಹಗಲು ಹೈರಾಣವಾಗಿದೆ ನಿನ್ನಿಂದ.

ಎಲ್ಲ ಕಾಲಕ್ಕೂ, ಎಲ್ಲರಂತೆ ಇಲ್ಲದ ಸಂಬಂಧ
ನೆನಪಿನಕೊಂಡಿ ಅಲ್ಲ ನಿನ್ನ ಇಲ್ಲಿ ನನ್ನ
ಅಬ್ಬೆ ಪಾರಿಯಂತೆ ನಿಲ್ಲಿಸಿ ಬಿಟ್ಟಿವೆ ಬಯಲಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣಕ ಸಸ್ಯಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೯

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys